Posts

Showing posts from September, 2012

ಪ್ರೀತಿಯ ಮಳೆ

ಸುರಿಯುತಿರುವ ಈ ಜಡಿ ಮಳೆಯು ಕೆದುಕುತಿಹುದು ಮನವೆಂಬ ಜಲಾಶಯವ ಹುಟ್ಟುವ ಭಾವನೆಗಳೆಷ್ಟೋ,ಬರುವ ಯೋಚನೆಗಳೆಷ್ಟೋ,ಈಡೇರುವ ನೆನಪುಗಳೆಷ್ಟೋ, ಈ ಸಂಭ್ರಮದಲಿ   ಮರೆಯಲಾರದ ನನ್ನವಳ ನೆನಪುಗಳೆಷ್ಟೋ ಆಡಿದ ಪಿಸುಮಾತುಗಳೆಷ್ಟೋ, ತೀರದ ದಾಹವ ತಣಿಸಲು ಮೀಯಬೇಕು ಇನ್ನು   ಈ ಮಳೆಯಲಿ ಮಳೆಯ ಸಿಂಚನದಲಿ
             ಶ್ರೀ ಶಂಕರಮ್ ಲೋಕ ಶಂಕರಮ್                                                                                                        ಭಾರತ ಇತಿಹಾಸದಲ್ಲಿ ನಾವುಗಳು ಅದೆಷ್ಟೋ ವೀರರನ್ನು,ವೈರಾಗಿಗಳನ್ನು,ಸಾಹಸಿಗರನ್ನು,ದೇಶಭಕ್ತರನ್ನು ನೋಡಿದ್ದೇವೆ. ಆದ್ಯಾತ್ಮ ಜಗತ್ತಿಗೇ ಕಳಸಪ್ರಾಯವಾದ ಭಾರತ,ಜಗತ್ತಿಗೆ ಅದೆಷ್ಟೋ ಮಂದಿ ರ್ದಾರ್ಶನಿಕರನ್ನು,ಪಂಡಿತರನ್ನು,ಸಂತರನ್ನು ನೀಡಿದೆ. ಆದರೆ ಆ ಎಲ್ಲಾ ಮಹಾತ್ಮರಲ್ಲಿ ಮೇರು ಪರ್ವತದಂತಿರುವವರು ಜಗದ್ಗುರು ಶ್ರೀ ಶ್ರೀ ಶ್ರೀ ಶಂಕರಾರ್ಚಾರ್ಯರು. ಬಾಲ್ಯದ ಐದನೇ ವಯಸ್ಸಿನಲ್ಲಿ ಉಪನಯನ,...